ಎಲ್ಲವೂ ಮುಗಿದಮೇಲೆ.
ಬಯಸುವುದು ಮನ ಮತ್ತೊಮ್ಮೆ ಬದುಕಲು
ಬಯಸದೆ ಏನನ್ನೂ ಎಲ್ಲವೂ ಮುಗಿದಮೇಲೆ,
ಬದುಕಿನುದ್ದಕ್ಕೂ ವಿಶ್ರಾಂತಿಗಳ ಪಡೆದು
ಕೊನೆಯಲ್ಲಿ ಬಾನೆತ್ತರದ ಮುಕ್ತಿಯಡೆಗೆ ಜಿಗಿಯುವ ಹೆಬ್ಬಯಕೆ,
ಅಂತರಾಳ ಅಳುತ್ತಿದೆಯಲ್ಲ ಬದುಕ ಕೊನೆಯ ಹೊಸ್ತಿಲಲ್ಲಿ
ಈ ಸಂಜೆಗೊ, ಕತ್ತಲೆಗೊ ತನ್ನಾತ್ಮದಿಂದ ದೂರವೆಂದರಿತು.
ಜೀವನದ ತತ್ವಗಳ ತಳಕುಗಳೆಲ್ಲವೂ ತಿಳಿದರೂ
ಅಜ್ಞಾನದ ಹೊದಿಕೆ ಹೊದಿಸಿಕೊಂಡೆ ಬುದ್ಧಿಯ ಮೇಲೆ,
ಅಲ್ಲೆಲ್ಲೋ ನಿನಗಾಗಿ ಗುರು ಗಸ್ತು ಹಿಡಿದು ಕಾಯುತ್ತಿದ್ದರೂ
ತನ್ನೊಳಗಿನ ಮನೋ ಅಜ್ಞಾನಿಯನ್ನೇ ಗುರುವಾಗಿಸಿಕೊಂಡೆ,
ಪರಮ ಸತ್ಯದ ಬೆಳಕು ಕಂಡರೂ ಲೌಕಿಕ ಕತ್ತಲೆಯ ಬಯಸಿ
ಮತ್ತೆ ಮತ್ತೆ ಹುಟ್ಟು ಸಾವೆಂಬ ಕತ್ತಲೆ ಬೆಳಕಿನಾಟದಲ್ಲಿ ಸಿಲುಕಿಕೊಂಡೆ.
ಅಂದು ಎಲ್ಲವೂ ಅಲ್ಲಗಳೆದು ಇಂದು ಅಳುತ್ತಿದೆ ಬುದ್ದಿ
ತೀರಾ ವಿಳಂಬವಾಯಿತೆಂದು ಅರಿಯುವಲ್ಲಿ ಬದುಕ ಸತ್ಯ,
ಸೃಷ್ಟಿಯ ಕಟು ಸತ್ಯಗಳ ಕಂಡು ಅಂದು ನಗುತ್ತಿದ್ದ ಅಂತರಾಳ
ಭೋರ್ಗರೆದು ಅಳುತ್ತಿದೆಯಲ್ಲ ಇಂದು ಕೋನೆಯುಸಿರಲ್ಲಿ ಅರಿತಾಗ ಎಲ್ಲಾ ಮಿಥ್ಯ,
ಕ್ಷಣಕ್ಕಾದರೂ ಸರಿ ಆರಾಧಿಸು ಅವನೆಂಬ ಅಂತಿಮ ಸತ್ಯವ
ಮತ್ತೆಂದು ಕಳಿಸದಿರೆಂದು ಮರುಜನ್ಮವೆಂಬ ಸುಳಿಗೆ.
........ಬಸವ.
Super
ReplyDeleteSuper bassu... Loved it.
ReplyDeleteAwesome
DeleteSuperb bro..
ReplyDeleteSuper bro
ReplyDeleteSuper 👌
ReplyDelete