ದಕ್ಷಿಣ ಕಾಶಿ ರಾಮೇಶ್ವರಮ್.
'ರಾಮೇಶ್ವರಮ್' ಚಾರ್ ಧಾಮಗಳಲ್ಲಿ ಇದೂ ಒಂದು. ದಕ್ಷಿಣದ ತುತ್ತತುದಿಯಲ್ಲಿ ಶ್ರೀ ರಾಮನಿಂದಲೇ ಸ್ಥಾಪಿತಗೊಂಡ ಸುಂದರ ಮತ್ತು ಸುಭಧ್ರ ದೇವಾಲಯ. ಮಹಾಬ್ರಾಹ್ಮಣ ರಾವಣನನ್ನ ಸಂಹರಿಸಿದ ಪ್ರಾಯಶ್ಚಿತಕ್ಕಾಗಿ ನಿರ್ಮಿಸಿದ ದೇವಾಲಯ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿನದೊಂದು. ಮಧುರೈ ಅಲ್ಲಿ ಅಡ್ಡಾಡಿದ್ದು ಅಷ್ಟೇನು ಆಯಾಸಕರವಾಗಿರಲಿಲ್ಲ. ಬಸ್ಸು ರಾಮನಾಡ್ ಅಥವಾ ರಾಮನಾಥಪುರದಿಂದ ರಾಮೇಶ್ವರದ ಕಡೆ ತೆರುಳುತ್ತಿತ್ತು. ಸ್ನಿಗ್ದ ಕತ್ತಲು,ಚಳಿಯೋ ಅಥವಾ ತಂಗಾಳಿಯೋ ಎಂದು ವ್ಯಾಖ್ಯಾನಿಸಲಾಗದ ಸಮಯ. ಮೊದಲಿಗೆ ಭೇಟಿಸಿಗುವುದು ಪಂಬನ್ ಎಂಬ ಹಳ್ಳಿ, ರಸ್ತೆಬದಿಯಲ್ಲಿ ಮಿನಿನಂಗಡಿಗಳು,ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡ ಶಿಲುಬೆಗಳು ಕಾಣಸಿಗುತ್ತಿವೆ. ಬ್ರಿಡ್ಜ್ ದಾಟಿದ ನಂತರ ರಾಮೇಶ್ವರಮ್ ದ್ವೀಪ.ಬ್ರಿಡ್ಜ್ ಇಂದಲೇ ಕತ್ತಲಲ್ಲಿ ಕಾಣಸಿಗುವ ದೊಡ್ಡ ಸಮುದ್ರ ನಮ್ಮನ್ನ ಅದಾಗಲೇ ಉತ್ತೇಜನಗೊಳಿಸಿತ್ತು. ರಾಮೇಶ್ವರಮ್ ಅಬ್ದುಲ್ ಕಲಾಂ ರ ಹುಟ್ಟುರು ಸಹ ಹೌದು. ಸುತ್ತಲೂ ಸಮುದ್ರದ ಮಧ್ಯೆಗಿನ ಚಿಕ್ಕ ದ್ವೀಪ,ಲಂಕೆಗೆ ಹನುಮಂತ ಲಗ್ಗೆ ಇಟ್ಟ ಸ್ಥಳ. ಅದೆಷ್ಟೋ ಬಾರಿ ಸುನಾಮಿಗಳನ್ನ ಎದುರಿಸಿದೆ ಈ ಪುಣ್ಯಭೂಮಿ. ಇಲ್ಲಿನ ನಿವಾಸಿಗಳು ಬಾಗಶಃ ಮೀನುಗಾರರೆ, ಸುಮಾರು ನಲವತ್ತಿಕ್ಕಿಂತ ಹೆಚ್ಚು ಚಿಕ್ಕಪುಟ್ಟ ಹಳ್ಳಿಗಳನ್ನ ಈ ದ್ವೀಪ ಸಾಕಿ ಸಲಹುತ್ತಿದೆ. ದೇವಸ್ಥಾನದ ಮಾರ್ಗದಲ್ಲಿಯೇ ಒಳ್ಳೆಯ ಬೆಲೆಗೆ ಸಿಕ್ಕ ಚಿನ್ನಸ್ವಾಮಿ ಖಾಸಗಿ ವಸುಹಾತಿನಲ್ಲಿ ಉಳಿದುಕೊಂಡ್ವಿ. ಅ