ಹೊಸತೇನಿಲ್ಲವಯ್ಯ ಇಲ್ಲಿ
ಅಲ್ಲೆಲ್ಲೋ ಅವಿತ ಅದೃಶ್ಯ ನೋವುಗಳ ಹುಡುಕಿ ಸದಾ ಸಂತಸದಲಿರುವ ಹೃದಯಕ್ಕೇಕೆ ಕೇಕೆ? ಮುದುಡುವ ಮಾಯೆಯಲ್ಲೇಕೆ ಸಿಕ್ಕಿಸುವೆ ಸರಾಗವಾಗಿ ಸಾಗುತ್ತಿರುವ ಸಹನೆಯ ಬದುಕ. ಆದದ್ದಾಗಲಿ,ಸಿಕ್ಕದ್ದು ಸಿಗಲಿ ಎನ್ನುವ ಪರಿ ಅರಿತರು ಮತ್ತೇಕೆ ಅಳುವುದು ಅರಿತೇ ಅಳುಕಿದ ಅಮಲುಗಳಿಗೆ? ಹೊಸತೇನಲ್ಲವಲ್ಲ ಇಂದು ಕಂಡ ಬದುಕ ಕಷ್ಟಗಳು ಸುಖದ ಸಿರಿಗೆ ಮೈಯ್ಯೊಡ್ಡಿ ಮರೆತಿರುವೆ ನಿನಿಂದು ಆದಿನದ ಕಷ್ಟಗಳ. ಬಯಕೆಯು ನಿನ್ನದೇ ಅದರ ಬವಣೆಯು ನಿನ್ನದೇ ಅನುಭವಿಸುವಲ್ಲೇಕೆ ಅಂಜಿಕೆ,ಅಳುಕು,ಅಳಲು? ಹಲವು ನಾದದಿ,ರಾಗದಿ ಕೇಳಿ ಪಡೆದಿರುವೆ ಇವು ಕರ್ಮದಿ ಮತ್ತೇಕೆ ಹಿಂಜರಿಯುವೆ ಇಂದು ಇಹದರೊಂದಿಗೆ ಜೀವಿಸಲು? ಮುಪ್ಪೆಂಬ ಮುರಕ್ಷರದ ನಿರಾಸೆ ಮೂಡುವುದರೊಳಗೆ ಮುನ್ನುಗ್ಗು ಮೋಕ್ಷದೆಡೆಗೆ ಎಡೆಬಿಡದೆ ಅರಿತು ಜೀವದ ಸಾಕ್ಷ್ಯ ಮರುಗದಿರು ಮನಕೆ ಸಿಗದ ಮುದಗಳ ನೆನೆದು ಅಲ್ಲದಿರುವ ಆಲಸ್ಯಗಳೆಂದು ಸುಳಿಯವವು ಅವನ ನೆರಳಲ್ಲಿ. ......ಬಸವ