ಅವನಿರುವ ಕುಟೀರದೆಡೆಗೆ.



ಬಾಳ ಬಂಡಿಯಿದು ಸಾಗುತ್ತಲೇ ಇರುವುದು,
ಅದನ್ನೋಡಿಸುವುದೂ ಬೇಡ ನಿಲ್ಲಿಸುವುದು ಬೇಡ
ತಿಳಿದ ತಿರದೆಡೆಗೆಯೇ ದೂಡುವ ಬಂಡಿಯದು,
ಸುಮ್ಮನೆ ಸಾಗುತ್ತಿರಬೇಕದರಲಿ ನಾವು ನೀವು, ಓಡಿಸುತ್ತಿರುವವನು ಅವನು ತಾನೇ ತೋರಿಸಿದ ಹಾದಿಯಡೆಗೆ.

ತಗ್ಗಿನಲೊಮ್ಮೆ ಕುಲುಕುವುದು ಜರಿಯಿವುದು ಜಜ್ಜುವುದು,
ಒಮ್ಮೊಮ್ಮೆ ಪಾತಾಳದಕಡೆ ವಾಲುವುದು ಬಿದ್ದಂತ್ತಾಗುವುದು,
ಇಳಿಜಾರಿನಲ್ಲಿ ಮತ್ತೆ ಮೆತ್ತಗೆ ಓಡುವುದು 
ಸುಖ ಶಾಂತಿಯ ಹಾಡುವುದು,
ಒಮ್ಮೊಮ್ಮೆ ಅಳಿಸುವುದದು ನಗಿಸುವುದದು ಕಾಲಕಾಲಕ್ಕೆ,
ಸುಮ್ಮನೆ ಸಮ್ಮತಿಸಿ ಸಾಗಬೇಕು  ಅವನ ಕೈಯಲ್ಲಿರಲು ಚಾಟಿ.

ಅತ್ತಿತ್ತ ಯಾರೋ ಕರೆದಂತ್ತೆ,ಮಾಯೆಗಳು ಕುಣಿದಂತ್ತೆ,
ಅಲ್ಲೇನೋ ಅಂದವಂತ್ತೆ ಚಂದವಂತ್ತೇ ಚಿತ್ತಾರವಂತ್ತೆ,
ಚಿತ್ತದಲ್ಲೆಲ್ಲಾ ಚಿಂತೆ ಮೂಡಿಸಿ ಸೆಳೆಯುವವಂತ್ತೇ,
ಅತ್ತಲೋ ಇತ್ತಲೋ ಇಣುಕದೆ ಕೆಣಕದೆ ವೈಮನಸ್ಸು
ಮೆಲ್ಲಗೆ ಸಾಗಬೇಕು ಮುಕುತಿಯಡೆಗೆ ಅದು ಅವನಿರುವ ಕುಟೀರದೆಡೆಗೆ.

                                             ...........ಬಸವ.

Comments

  1. ಸಾಗಬೇಕು ಮುಕುತಿಯಡೆಗೆ ಅದು ಅವನಿರುವ ಕುಟೀರದೆಡೆಗೆ.
    👌👌👌

    ReplyDelete
  2. ಅತ್ತಿತ್ತ ಯಾರೋ ಕರೆದಂತೆ ಮಾಯೇಗಳು ಕುಣಿದ್ದಂತ್ತೇ ಅಲ್ಲೇನೋ ಅಂದವಂತ್ತೇ ಚಿತ್ತಾರವಂತೆ ಚಿತ್ತದಲ್ಲೆಲ್ಲಾ ಚಿಂತೆ ಮೂಡಿಸಿ ಸೆಳೆಯುವವoತ್ತೇ....

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ