ಸೃಷ್ಟಿಕರ್ತ
ನುರಿತ ಮನಸುಗಳ ನೇಕಾರ ಅವನು,
ನಮ್ಮ ನಿಮ್ಮೆಲ್ಲರ ಆಡಂಬರಗಳ,
ಅಳಲುಗಳ,ಆವೇಶಗಳ, ರೂವಾರಿ ಅವನು
ಜಗದೊಡೆಯನವನು ಸೃಷ್ಟಿಕರ್ತ ಅವನು.
ನಿನ್ನ ಸ್ವೀಕಾರವು ಅವನದೇ,
ನಿರಾಕಾರವು ಅವನದೇ.
ನಿನರಿಯದಂತೆ ನಿನ್ನ ನಡೆಸುತಿಹನವನು,
ಬಯಸಿದ ಬಯಕಗೆಳೆಲ್ಲ ಸುಳ್ಳು ,
ಸಿಕ್ಕಿದ್ದು ಸ್ವಾಗತಿಸು,ಅನುಕರಿಸು,ಆರಾಧಿಸು,
ತಿಳಿದುಕೊಡುವನವನು ಸ್ರಷ್ಟಿ ಕರ್ತ
ಪ್ರಶ್ನಿಸುವ ಹಕ್ಕು ನಿನಗಿಲ್ಲ.
ನಿನ್ನಾಸೆಗಳನ್ನ ಮೂಡಿಸಿದ್ದುಅವನೇಯೇ,
ಒಳಗೊಳಗೇ ನಿರಾಕರಣೆಯ ಮುನ್ಸೂಚನೆ
ನೀಡಿದವನು ಅವನೇಯೇ.
ಅಳಲುಗಳು ನಿನ್ನ ಕರ್ಮಕ್ಕಿರಲಿ,
ದೂರದಿರನು ಅವನನ್ನು,
ತಿಳಿದೇ ಕರುಣಿಸಿಹನು ನಿನ್ನ ಭಾಗ್ಯ.
ಯಾವ ಸ್ವರ್ಗ ನರಕವು ಶಾಶ್ವತವಲ್ಲ,
ಕಾಲ ಚಕ್ರ ಉರುಳಿದಂತೆಯೇ ಜೀವನ.
ಸ್ವೀಕರಿಸಿ ಸ್ವಾಗತಿಸಿ ಮುನ್ನಡೆ
ಜಗದೊಡೆಯನ ಆಜ್ಞೆ ಇದು,
ಅರಿತುಕೊ ಕೇಳುವ ಮುನ್ನ
ನಿನ್ನ ಪ್ರಶ್ನೆಗಳನ ಪ್ರಶ್ನಿಸಿದ್ದು ಅವನೆಯೇ.
ಅವನ ನೆರಳು ಕತ್ತಲೆನ್ನುವದಕ್ಕಿಂತ
ತಂಪೆಂದು ಮುನ್ನಡೆ ಮುನ್ನುಗ್ಗು.
.................ಬಸವ
Last 2 lines are superb yaar..👌👌👌
ReplyDelete