ನಾ ಆಶಾವಾದಿ.



ಬಿರುಸು ಮಳೆಗಾಳಿಗೆ ಅಂಜಿ
ನಿನ್ನ ಅಡಿಯಲ್ಲಿ ಅವಿತುರುವೆನು ನಾನು
ಅಣುಕಿಸದೆಯೇ ಆಶ್ರಯವ ಕರುಣಿಸು ನನಗೆ.

ಮನದ ನೂರೆಂಟು ದಿಗಿಲುಗಳ ಮಧ್ಯೆಯೂ
ನಿನ್ನನ್ನೇ ಸ್ಮರಿಸುತ್ತಲಿ ಸಾಗುತ್ತಿರುವೆನು ನಾನು
ಅಂಧಕಾರವನ್ನ ಅಳಿಸಿ ನಿನ್ನ ಆಶಾವಾದಿಯನ್ನಾಗಿಸು ನನ್ನ.

ಹಲವು ಭ್ರಮೆಗಳು ಬೆಳೆದು ನಿಂತರೂ ನನ್ನಲ್ಲಿ
ನಿನ್ನ ಅಸ್ತಿತ್ವದ ಸತ್ಯಶೋಧನೆಯಲ್ಲಿಯೇ ತೊಡಗಿಹೆನು ನಾ
ನೀನೇ ಸತ್ಯವೆಂಬ ಪ್ರಕಾಶವನೊಮ್ಮೆ ಅನುಗ್ರಹಿಸು ನನ್ನಲ್ಲಿ.

ನಿನ್ನಲ್ಲಿಯೇ ಸೇರುವ ಹಸಿವಿಂದ ಬಳಲುತ್ತಿರುವೆನು ನಾನು
ನನ್ನಲ್ಲಿನ ಈ ಲೋಕದ ಲೋಭಗಳ ಲೋಪವನ್ನ ಅಳಿಸಿ
ನಿನ್ನಡೆಗಿನ ಹಾದಿ ಎಂದಿಗೂ ತಪ್ಪದಂತ್ತೆ ಆಶಿಸು ನನ್ನ.

                                                  ..............ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ